Skip to main content
" ಯಾವ ಘಳಿಗೆಯು ನನ್ನ ಮನಸ್ಸನ್ನು ಮುದಗೊಳಿಸುತ್ತದೆಯೋ,
ಆ ಸಮಯವೇ ನನಗೆ ಸ್ಪೂರ್ತಿ..!
ಯಾವ ಘಳಿಗೆಯು ನನ್ನ ಕಷ್ಟಗಳನ್ನು ಎದುರಿಸುತ್ತದೆಯೋ,
ಆ ಸಮಯವೇ ನನಗೆ ಗುರು..!
ಯಾವ ಘಳಿಗೆಯು ಇನ್ನೊಬ್ಬರ ಸಜ್ಜನಿಕೆಯನ್ನು ತಿಳಿಸುತ್ತದೆಯೋ,
ಆ ಸಮಯವೇ ನನಗೆ ಪಾಠ..!
ಯಾವ ಘಳಿಗೆಯು ಇನ್ನೊಂದು ಮನಸ್ಸಿನ ಭಾವನೆಗಳಿಗೆ ಸ್ಪಂದಿಸಲು ಸಹಕರಿಸುತ್ತದೋ,
ಆ ಸಮಯವೇ ನನಗೆ ಧ್ಯಾನ..!
ಯಾವ ಘಳಿಗೆಯು ನನ್ನವರನ್ನು ನೆನೆಯಲು ಸಹಕರಿಸುತ್ತದೋ,
ಆ ಸಮಯವೇ ನನಗೆ ನೆಮ್ಮದಿ..!
ಯಾವ ಘಳಿಗೆಯು ನನ್ನ ಕಷ್ಟಗಳಿಗೆ ಸ್ಪಂದಿಸುತ್ತದೆಯೋ,
ಆ ಸಮಯವೇ ನನಗೆ ವಿಶ್ರಾಂತಿ..! "

Comments

Popular posts from this blog

ಚುಂಬನದ ಸಿಹಿ..

                                         ನಿನ್ನ ಚುಂಬನದ ಸಿಹಿಯ,                                                     ನಾ ಹೇಗೆ ಬಣ್ಣಿಸಲಿ?                                          ಆಧಾರವಿಲ್ಲವಷ್ಟೆ..                        ...

ಹೀಗೊಂದು ಪ್ರೇಮ ಪತ್ರ..,,

ನಿನ್ನ ನಗು ನನ್ನ ಕಣ್ಣಂಚಲಿ ನಿನ್ನ ಮಾತು ನನ್ನ ಮನದಾಳದಿ ನಿನ್ನ ನೆನಪೊಂದೆ ಸಾಕು ನನ್ನ ಈ ಜೀವಕೆ ನಿನ್ನ ಮನಸೊಮ್ಮೆ ಕೊಡು ನನ್ನ ಈ ಪ್ರೀತಿಗೆ ! ನಿನ್ನ ಕಂಡಾಕ್ಷಣ ಪ್ರೀತಿ ಚಿಗುರೊಡೆಯಿತು ಮನದ ಆ ಕಂಪನ ನಿನಗೆ ತಿಳಿಯದೇ ಹೋಯಿತು..! ಮೌನ ನೋವಿಗೆ ಕಾರಣ ಹೃದಯ ನಗುವಿಗೆ ಕಾತುರ ನಿನ್ನ ಕನಸಿಗೆ ನಾನು ಹೆಗಲಾಗುವೆ ನನ್ನ ಪ್ರೀತಿಯ ನೀನು ಸ್ವೀಕರಿಸು ಬಾ..!

ಮಳೆಯಲಿ ನಿನ್ನ ಜೊತೆಯಲಿ..,,

ಈ ಇರುಳಲಿ ನಿನ್ನ ಜೊತೆಯಲಿ ... ನಾ ನೆನೆದೆನು ಇಂದು ಮಳೆಯಲಿ ಆ ತಂಪು ನೀರಿನ ಚಳಿಯಲಿ ... ಪ್ರೇಮಾಂಕುರವು ಈ ಮನದಲಿ . ತಂಗಾಳಿ ಬೀಸಿದ ಆ ಕ್ಷಣದಲಿ ... ನೀ ನಡೆದೆ ನನ್ನ ಜೊತೆಯಲಿ ನಿನ್ನ ಸಂಗಡ ಈ ಮಳೆಯಲಿ ... ನನ್ನನೇ ಮರೆತೆ ನಿನ್ನ ಪ್ರೀತಿಲಿ . ನನ್ನ ಮನವು ನಲಿದಿದೆ ಈ ಖುಷಿಯಲಿ ... ನೀನೆಂದೂ ಇರುವೆ ನನ್ನ ಕನಸಲಿ ನಮ್ಮ ಪ್ರೀತಿಯ ಬೆಸುಗೆ ಈ ಮಳೆಯಲಿ ... ಚಂದಿರನೆ ಸಾಕ್ಷಿ ಈ ಇರುಳಲಿ .    ** ಈ ಸಾಲುಗಳನ್ನು ಬರೆಯಲು ನನಗೆ ಸಲಹೆಯನ್ನಿತ್ತ ನನ್ನ ಗೆಳತಿಗೆ ಅರ್ಪಣೆ.