Skip to main content

Posts

ಪಾರಿಜಾತಾ...

ದಾರಿಯಲೊಮ್ಮೆ, ಒಮ್ಮೆ ದಾರಿಯಲೊಮ್ಮೆ ಸಿಕ್ಕಿಬಿಟ್ಲು ಜಾತಾ ಜಾತ ಪಾರಿಜಾತಾ ! ನಿನ್ನ ಹೂವನಡಿಗೆ, ನಡಿಗೆ ನಿನ್ನ ಹೂವನಡಿಗೆಯಿಂದೇ ಹೃದಯ ಘಾತ ಜಾತ ಪಾರಿಜಾತಾ ! ವಯಸಿನಿಂದ ಬಂದೆ ಮನಸು ಮಾತ್ರ ನಂದೆ ಮನಸು ಕೊಡಲೆಂದೇ ನಿನಮನೆ ಬಳಿಬಂದೆ ನಿನ್ನ ಮನಸು ಕೊಟ್ಟುಹೋಗೆ ಜಾತಾ, ಜಾತ ಪಾರಿಜಾತಾ ! ಮೈಸೂರ್ ಮಲ್ಲಿಗೆ ತಂದೆ ಸೆಂಟು ಗಿಂಟು ನಿಂದೆ Colour ಚೂಡಿದಾರ ಒಂದೇ ಹಾಕ್ಕೊಂಬಿಡು ಬಂದೆ ದುಡ್ಡು ಗಿಡ್ಡು ಕಟ್ಕೊಂಬಾರೆ ಜಾತಾ, ಜಾತ ಪಾರಿಜಾತಾ ! ಕಲರ್ TV ತಂದೆ ಕಲರ್ Filmi ಗೆಂದೇ ವರ್ಷ ಪೂರ್ತಿ ಬಂದೆ ನಿನಗೋಸ್ಕರ ಹಿಂದೇ ಹಳೆ ಚಪ್ಲೀಲ್ ಹೊಡಿಬೇಡ ಜಾತಾ, ಜಾತ ಪಾರಿಜಾತಾ !

ಕಣ್ಣೀರ ಹನಿ

ಮರೆತೆ ಮಾತೊಂದ ಹೇಳುವುದು ನೀನು ಸಿಕ್ಕಾಗ ಕಣ್ಣೀರ ಸುಳಿವು, ಬಾಡಿದ ಮುಖದಲ್ಲಿ ಇನ್ನೂ ಬಳಿಬಂದು ಹೇಳುವ ಅಭಿಲಾಷೆ ಭಯವೋ....?? ನಂಬಿಕೆ....!! ನೀನು ತಿರಸ್ಕರಿಸಳಾರೆ. ಮಾತಿಗಾದರೂ ಸಿಗು ಎಂದೆಂದೂ ಬಹುದೂರದ ಪಯಣದಿ. ನೀನಾರೋ..?? ಗೆಳತಿಯೋ..?? ಪ್ರೇಯಸಿಯೋ..?? ಗೊತ್ತಿಲ್ಲ ನಿನ್ನ ಇರುವಿಕೆ ಮನಕೆ ಆದರೂ, ಮನ ಕದಲಿದೆ. ಕಣ್ಣೀರ ಹನಿಯೋ....,, ಬರೆದ ಅಕ್ಷರಗಳ ನಡುವೆ....

ಸನಿಹ ಬಯಸಿ

ದುಃಖಿತನಾಗಿ ಬಂದೆ ನಿನ್ನ ಸನಿಹ ಬಯಸಿ, ಸಂತೈಸುವಿಯೆಂದು ನಿನ್ನ ಸನಿಹವೋ..?? ಉಲ್ಬಣಿಸಿತು ದುಃಖ ನೀ ಅರಿಯಲಾರಳೆಂದು. ಬಂಧನದ ನಡುವೆ ಬಿರುಕಿನ ಸೂಚನೆ ನಾ ತಿರಸ್ಕರಿಸಲೇ..?? ಉಸಿರು ಚಲಿಸದು ಮುಂದೆ ನೀ ಅರಿತು ಅಪ್ಪುವೆಯಾ..??

ಪ್ರೀತಿ..!!

ಪ್ರೀತಿ ಹೇಳಲು ತುಡಿಯುವ ಮನಸ್ಸಿಗೆ ಪದಗಳಿಲ್ಲ ಗೆಳತಿ , ಕಣ್ಣ ಸನ್ನೆಯ ಹೊರತಾಗಿ .. ನಿನ್ನ ಕಣ್ಣಂಚಿನ ಪ್ರಭೆಯೋ , ಕರಗಿ ಹೋಗಿರುವೆ ಮನಸಾರೆ .. ಸಮ್ಮತಿಸು ಈ ಮನಸಿಗೆ ಆ ನಿನ್ನ ಕಣ್ಣ ರೆಪ್ಪೆಯ ಬಡಿದು ..!!!!

|| ಹರ ಹರ ಕೇದಾರನಾಥ ||

ಮಸಣವೊಂದು ಊರ ನಡುವೆ ಶಿವನ ನೆಲೆಯೂ, ದೈವ ಕೃಪೆಯಿದ್ದಂತೆ ಶಿವನಿಚ್ಛೆಯೋ....???? ನೆಲೆಸಿಲ್ಲ ಜಗದೊಳು, ಮಸಣವಿಲ್ಲದೆಡೆ ಭಕ್ತರ ಸಲಹುವಲಿ ಶಿವನರಸಿಹೊರಟು ಧ್ಯಾನದಲಿರುವಾಗ ಮುಕ್ಕಣ್ಣ ತೆರೆದು, ಜಗವ ಮಸಣವ ಮಾಡಿದೆ ನೀನು ಹರ ಹರ ಕೇದಾರನಾಥ